Are you over 18 and want to see adult content?
More Annotations
A complete backup of iaestedresden.de
Are you over 18 and want to see adult content?
A complete backup of girightshotline.org
Are you over 18 and want to see adult content?
A complete backup of imam-khomeini.ir
Are you over 18 and want to see adult content?
A complete backup of tropicalsky.co.uk
Are you over 18 and want to see adult content?
A complete backup of coloringpages101.com
Are you over 18 and want to see adult content?
A complete backup of tanzfabrik-berlin.de
Are you over 18 and want to see adult content?
Favourite Annotations
A complete backup of https://ruslit.live/index.php?path=04240430043D04420430044104420438043A0430/0417043004400443043104350436043
Are you over 18 and want to see adult content?
A complete backup of https://www.creta.gr/company.php?id=4914
Are you over 18 and want to see adult content?
A complete backup of https://www.blogger.com/profile/09007680107074738226
Are you over 18 and want to see adult content?
A complete backup of https://dramasq.com/th170507/6.html
Are you over 18 and want to see adult content?
A complete backup of https://www.bluestacks.com/
Are you over 18 and want to see adult content?
A complete backup of https://www.livescorehunter.com/
Are you over 18 and want to see adult content?
A complete backup of http://borsaistanbul.com/en/
Are you over 18 and want to see adult content?
A complete backup of https://chinaq.me/cn210208/
Are you over 18 and want to see adult content?
A complete backup of https://v-s.mobi/gazebo-lunatic-12-remix-06:18
Are you over 18 and want to see adult content?
A complete backup of https://tl.rulate.ru/book/1572/
Are you over 18 and want to see adult content?
Text
PAGES
* Home
* ವಿಷ್ಣು ಸಹಸ್ರನಾಮ ಅರ್ಥಸಹಿತ * ಭಗವದ್ಗೀತಾ * ಕಠೋಪನಿಷತ್ * ಷಟ್ ಪ್ರಶ್ನೋಪನಿಷತ್ * ನರಸಿಂಹ ಸ್ತುತಿ * ತಾರಾ ಪ್ರಕಾಶನ * ಪ್ರವಚನ* ಗೋ-ಕುಲ
* ಭರ್ತೃಹರಿ* GitA in English
* ಮಹಾಭಾರತ* Kindle Edition
MBTN
VISIT OUR NEW BLOG @: HTTPS://MAHABHARATATATPARYANIRNAYA.BLOGSPOT.IN/ DOWNLOAD IN PDF FORMAT : ಸುಮಾರು ಐದು ಸಾವಿರ ವರ್ಷಗಳ ಹಿಂದೆ, ದ್ವಾಪರದ ಕೊನೆಯಲ್ಲಿ, ವೇದಗಳನ್ನು ವಿಂಗಡಿಸಿ ಬಳಕೆಗೆ ತಂದ ಮಹರ್ಷಿ ವೇದವ್ಯಾಸರೇ ಅವುಗಳ ಅರ್ಥವನ್ನು ತಿಳಿಯಾಗಿ ವಿವರಿಸಲು ಹದಿನೆಂಟು ಪುರಾಣಗಳನ್ನು ರಚಿಸಿದರು. ಈ ಪುರಾಣಗಳಲ್ಲಿ ಹೆಚ್ಚು ಪ್ರಸಿದ್ಧವಾದುದು ಹಾಗೂ ಪುರಾಣಗಳ ರಾಜ ಎನ್ನಬಹುದಾದ ಮಹಾಪುರಾಣ ಭಾಗವತ. ಸಾವು ಎನ್ನುವ ಹಾವು ಬಾಯಿ ತೆರೆದು ನಿಂತಿದೆ. ಜಗತ್ತಿನ ಎಲ್ಲಾ ಜೀವಜಾತಗಳು ಅಸಾಯಕವಾಗಿ ಅದರ ಬಾಯಿಯೊಳಗೆ ಸಾಗುತ್ತಿವೆ. ಈ ಹಾವಿನಿಂದ ಪಾರಾಗುವ ಉಪಾಯ ಉಂಟೇ? ಉಂಟು, ಶುಕಮುನಿ ನುಡಿದ ಶ್ರೀಮದ್ಭಾಗವತವೇ ಅಂಥಹ ದಿವ್ಯೌಷಧ. ಜ್ಞಾನ-ಭಕ್ತಿ ವಿರಳವಾಗಿರುವ ಕಲಿಯುಗದಲ್ಲಂತೂ ಇದು ತೀರಾ ಅವಶ್ಯವಾದ ದಾರಿದೀಪ. ಇಲ್ಲಿ ಅನೇಕ ಕಥೆಗಳಿವೆ. ಆದರೆ ನಮಗೆ ಈ ಕಥೆಗಳಿಗಿಂತ ಅದರ ಹಿಂದಿರುವ ಸಂದೇಶ ಮುಖ್ಯ. ಒಂದು ತತ್ತ್ವದ ಸಂದೇಶಕ್ಕಾಗಿ ಒಂದು ಕಥೆ ಹೊರತು, ಅದನ್ನು ವಾಸ್ತವವಾಗಿ ನಡೆದ ಘಟನೆ ಎಂದು ತಿಳಿಯಬೇಕಾಗಿಲ್ಲ. ಮನಸ್ಸು ಶುದ್ಧವಾಗಿದ್ದರೆ ಎಲ್ಲವೂ ಶುದ್ಧ. ಮನಸ್ಸು ಮಲೀನವಾದರೆ ಮೈತೊಳೆದು ಏನು ಉಪಯೋಗ? ನಮ್ಮ ಮನಸ್ಸನ್ನು ತೊಳೆದು ಶುದ್ಧ ಮಾಡುವ ಸಾಧನ ಈ ಭಾಗವತ. ಶ್ರದ್ಧೆಯಿಂದ ಭಾಗವತ ಓದಿದರೆ ಮನಸ್ಸು ಪರಿಶುದ್ಧವಾಗಿ ಭಗವಂತನ ಚಿಂತನೆಗೆ ತೊಡಗುತ್ತದೆ. ಬಿಡುಗಡೆಯ ದಾರಿಯನ್ನು ತೆರೆದು ತೋರಿಸುತ್ತದೆ. ಪೂಜ್ಯ ಬನ್ನಂಜೆ ಗೋವಿಂದಾಚಾರ್ಯರು ತಮ್ಮ ಭಾಗವತ ಪ್ರವಚನದಲ್ಲಿ ಒಬ್ಬ ಸಾಮಾನ್ಯನಿಗೂ ಅರ್ಥವಾಗುವಂತೆ ವಿವರಿಸಿದ ಭಾಗವತದ ಅರ್ಥಸಾರವನ್ನು ಇ-ಪುಸ್ತಕ ರೂಪದಲ್ಲಿ ಸೆರೆ ಹಿಡಿದು ಆಸಕ್ತ ಭಕ್ತರಿಗೆ ತಲುಪಿಸುವ ಒಂದು ಕಿರುಪ್ರಯತ್ನವನ್ನು ಇಲ್ಲಿ ಮಾಡಲಾಗುತ್ತಿದೆ. ಚಿತ್ರಕೃಪೆ: ಅಂತರ್ಜಾಲ. DOWNLOAD IN PDF FORMAT :Skandha-01:All 20 Chapters e-Book SKANDHA-02 ALL 10 CHAPTERS E-BOOK SKANDHA-03, 1ST-5TH CHAPTERS E-BOOK Note: due to unavoidable reason we are unable to publish regular posts. But we will come back soon....... SATURDAY, OCTOBER 21, 2017 SHRIMAD BHAGAVATA IN KANNADA -SKANDHA-03-CH-06(10) ತಥಾSಪರೇ ತ್ವಾತ್ಮಸಮಾಧಿಯೋಗ ಬಲೇನ ಜಿತ್ವಾ ಪ್ರಕೃತಿಂ ಬಲಿಷ್ಠಾಮ್ । ತ್ವಾಮೇವ ಧೀರಾಃ ಪುರುಷಂ ವಿಶಂತಿ ತೇಷಾಂ ಶ್ರಮಃ ಸ್ಯಾನ್ನ ತು ಸೇವಯಾ ತೇ ॥೨೫॥ ತಾವು ಯಾವ ಕಾರ್ಯವನ್ನು ಮಾಡಲು ಸೃಷ್ಟಿಯಾಗಿದ್ದೇವೋ, ಆ ಕಾರ್ಯ ಮಾಡಲು ಬೇಕಾದ ಶಕ್ತಿ ಮತ್ತು ಮಾರ್ಗದರ್ಶನವನ್ನು ಬೇಡಿ ಭಗವಂತನನ್ನು ಸ್ತೋತ್ರ ಮಾಡುತ್ತಿರುವ ದೇವತೆಗಳು ಮುಂದುವರಿದು ಹೇಳುತ್ತಾರೆ: “ಇನ್ನು ಕೆಲವರು ಆತ್ಮಸಮಾಧಿಯೋಗದಿಂದ ಬಲಿಷ್ಠವಾದ ಪ್ರಕೃತಿಯನ್ನು ಗೆದ್ದು ನಿನ್ನನ್ನು ಹೋಗಿ ಸೇರುತ್ತಾರೆ. ಧೀರರಾದ ಇಂಥವರಿಗೆ ಇದು ಶ್ರಮ ಎನಿಸುವುದಿಲ್ಲ” ಎಂದು. ಇಲ್ಲಿ ಪ್ರಕೃತಿಯನ್ನು ಗೆಲ್ಲುವುದು ಎಂದರೆ ಸಂಸಾರ ಬಂಧನದಿಂದ ಕಳಚಿಕೊಳ್ಳುವುದು ಎಂದರ್ಥ. ನಾವು ಬಲಿಷ್ಟವಾದ ಪ್ರಕೃತಿ ಬಂಧನದಿಂದ ಕಳಚಿಕೊಳ್ಳಬೇಕೆಂದರೆ ನಮ್ಮನ್ನು ಈ ಸಂಸಾರದಲ್ಲಿರಿಸಿರುವ ಚಿತ್ಪ್ರಕೃತಿಯಾದ ತಾಯಿ ಶ್ರೀಲಕ್ಷ್ಮಿಯನ್ನು ಗೆಲ್ಲಬೇಕು. ದತ್ತಾತ್ರೇಯನು ತನ್ನ ಯೋಗಶಾಸ್ತ್ರದಲ್ಲಿ ಹೇಳುವಂತೆ: ‘ವಾಯೋಶ್ಚ ಪ್ರಕೃತೇರ್ವಿಷ್ಣೋರ್ಜಯೋ ಭಕ್ತ್ಯೈವ ನಾನ್ಯಥಾ’. ಅಂದರೆ: ವಾಯುದೇವನನ್ನು ಜಯಿಸುವುದಾಗಲಿ, ಚಿತ್ಪ್ರಕೃತಿಯನ್ನು ಜಯಿಸುವುದಾಗಲಿ ಕೇವಲ ಭಕ್ತಿಯಿಂದ ಮಾತ್ರ ಸಾಧ್ಯ ಹೊರತು ಇನ್ಯಾವ ಉಪಾಯದಿಂದಲೂ ಸಾಧ್ಯವಿಲ್ಲ ಎಂದರ್ಥ. ಹೀಗಾಗಿ ಪ್ರಕೃತಿಮಾತೆ ಶ್ರಿಲಕ್ಷ್ಮಿಯನ್ನು ಭಕ್ತಿಯಿಂದ ಒಲಿಸಿಕೊಳ್ಳುವುದೇ ಸಂಸಾರ ಬಂಧನವನ್ನು ದಾಟುವ ಉಪಾಯ. ಆದ್ದರಿಂದ ಅವಿನಾಭಾವಿಯರಾದ ಲಕ್ಷ್ಮೀನಾರಾಯಣರಲ್ಲಿ ಮನಸ್ಸನ್ನು ಏಕಾಗ್ರಗೊಳಿಸುವುದೇ(ಆತ್ಮ ಸಮಾಧಿಯೋಗ) ಪ್ರಕೃತಿ ಬಂಧದಿಂದ ಕಳಚಿಕೊಳ್ಳುವ ಏಕೈಕ ಮಾರ್ಗ. ಈ ರೀತಿ ಸಾಧನೆಯ ಮಾರ್ಗದಲ್ಲಿ ಭಗವಂತನ ಅನುಗ್ರಹವಾಗುವ ತನಕ ಬಿಡದೆ ಸಾಧನೆ ಮಾಡುವ ಗಟ್ಟಿಗರು ಮೋಕ್ಷವನ್ನು ಪಡೆಯುತ್ತಾರೆ. ಯಾರು ಭಗವಂತನ ಅರಿವಿನ ರುಚಿಯನ್ನು ಅನುಭವಿಸುತ್ತಾರೋ ಅವರಿಗೆ ಸಾಧನೆ ಎನ್ನುವುದು ಶ್ರಮ ಎನಿಸುವುದಿಲ್ಲ. ಏಕೆಂದರೆ ಜ್ಞಾನ ಮಾರ್ಗದ ಸಮಸ್ತ ಪ್ರಯತ್ನವೂ ಕೇವಲ ಆನಂದದ ಅನುಭವವೇ ಹೊರತು ಶ್ರಮವಲ್ಲ. Posted by Vishnu Priyaat 8:47 PM
1 comment:
Email This
BlogThis!
Share
to Twitter
Share
to Facebook
Share
to Pinterest
Labels: Bannanje GovindAcharya,
Bhagavata in Kannada,
ಬನ್ನಂಜೆ ಗೋವಿಂದಾಚಾರ್ಯರು,
ಭಾಗವತ ಕನ್ನಡದಲ್ಲಿ SUNDAY, OCTOBER 8, 2017 SHRIMAD BHAGAVATA IN KANNADA -SKANDHA-03-CH-06(9) ಮಾರ್ಗಂತಿ ಯತ್ ತೇ ಮುಖಪದ್ಮನೀಡೈಶ್ಛಂದಃಸುಪರ್ಣೈರೃಷಯೋ ವಿವಿಕ್ತೇ । ಯಚ್ಚಾಘಮರ್ಷೋ ದ್ಯುಸರಿದ್ದರಾಯಾಃ ಪರಂ ಪದಂ ತೀರ್ಥಪದಃ ಪ್ರಪನ್ನಾಃ ॥೧೯॥ ವೇದಾಧ್ಯಯನದಿಂದ ಜ್ಞಾನ ಪಡೆದ ಋಷಿಗಳು ಏಕಾಂತದಲ್ಲಿ ಭಗವಂತನ ಮುಖಕಮಲವೆನ್ನುವ ಗೂಡಿನಿಂದ ಹೊರಬಂದ ವೇದಮಂತ್ರವೆನ್ನುವ ಹಕ್ಕಿಯ ಮುಖೇನ ಭಗವಂತನ ಪಾದವನ್ನು ಹುಡುಕುತ್ತಾರೆ. ಭಗವಂತನ ಪಾದ ಭಕ್ತರ ಪಾಪವನ್ನು ಕಳೆಯುತ್ತದೆ. ಪವಿತ್ರಳಾದ ಗಂಗೆ ಮತ್ತು ತಾಯಿ ಸ್ಥಾನದಲ್ಲಿರುವ ಈ ಭೂಮಿ ಭಗವಂತನ ಪಾದದಿಂದಲೇ ಹುಟ್ಟಿರುವುದು. 'ದ್ಯುಸರಿತೋ ಧರಾಯಾಶ್ಚ' ಗಂಗೆಗೂ ಧರೆಗೂ ಆಶ್ರಯ ಆ ಭಗವಂತನ ಪವಿತ್ರವಾದ ಪಾದ. ಹೀಗೆ ದೇವತೆಗಳು ಭಗವಂತನನ್ನು ಧ್ಯಾನಿಸುತ್ತಾರೆ. Posted by Vishnu Priyaat 2:26 PM
1 comment:
Email This
BlogThis!
Share
to Twitter
Share
to Facebook
Share
to Pinterest
Labels: Skandha-03 Chapter-02,
ಬನ್ನಂಜೆ ಗೋವಿಂದಾಚಾರ್ಯ,
ಭಾಗವತ ಕನ್ನಡದಲ್ಲಿ,
ಮೂರನೇ ಸ್ಕಂಧ WEDNESDAY, MARCH 15, 2017 SHRIMAD BHAGAVATA IN KANNADA -SKANDHA-03-CH-06(8) ಋತೇ ಯದಸ್ಮಿನ್ ಭವ ಈಶ ಜೀವಾಸ್ತಾಪತ್ರಯೇಣಾಭಿಹತಾ ನಶರ್ಮ ।
ಆತ್ಮನ್ಲಭಂತೇ ಭಗವಂಸ್ತವಾಂಘ್ರಿ ಚ್ಛಾಯಾಂಶವಿದ್ಯಾಮತ ಆಶ್ರಯೇಮ॥೧೮॥
“ಈ ಸಾಂಸಾರಿಕ ಬದುಕಿನಲ್ಲಿ ನೀನು ಈಶ(ಸರ್ವಸಮರ್ಥ). ನಿನ್ನ ಪಾದಮೂಲದ ಸೇವೆ ಇಲ್ಲದಿದ್ದರೆ ಜೀವರು ಎಲ್ಲಾ ಕಡೆಯಿಂದಲೂ ತಾಪತ್ರಯದ ದುಃಖಕ್ಕೆ ಒಳಗಾಗಿ ಮಾನಸಿಕ ನೆಮ್ಮದಿಯನ್ನು ಕಳೆದುಕೊಳ್ಳುತ್ತಾರೆ. ಇಂತಹ ಸ್ಥಿತಿಯಿಂದ ಪಾರಾಗಲು ಇರುವ ಏಕಮಾತ್ರ ಮಾರ್ಗ: ನಿನ್ನ ಪಾದದ ನೆರಳಿನ ಒಂದು ಕ್ಲೇಶ ವಿದ್ಯೆಯ ಸೇವನೆ” ಎನ್ನುತ್ತಾರೆ ದೇವತೆಗಳು. ಇಲ್ಲಿ “_ಅಂಘ್ರಿ ಚ್ಛಾಯಾಂಶವಿದ್ಯಾ_” ಎನ್ನುವ ಪದ ಬಳಕೆಯಾಗಿದೆ. ಇದರ ಸ್ಥೂಲ ಅರ್ಥ: ಯೋಗ್ಯತಾನುಸಾರವಾದ ಭಗವಂತನ ಪ್ರಜ್ಞೆ. ಇದನ್ನು ಬ್ರಹ್ಮಪುರಾಣದ ಪ್ರಮಾಣ ಶ್ಲೋಕದೊಂದಿಗೆ ಆಚಾರ್ಯ ಮಧ್ವರು ತಮ್ಮ ತಾತ್ಪರ್ಯ ನಿರ್ಣಯದಲ್ಲಿ ವಿವರಿಸಿರುವುದನ್ನು ನಾವು ಕಾಣಬಹುದು. . ಬ್ರಹ್ಮಪುರಾಣದಲ್ಲಿ ಹೇಳುವಂತೆ: _‘ಬ್ರಹ್ಮವಿದ್ಯಾ ಹರೇಶ್ಛಾಯಾ ತದಂಶೋ ಹಿ ಸುರೇಷ್ವಪಿ__ __।__ __ಸರ್ವವಿದ್ಯಾಃ ಶ್ರಿಯಃ ಪ್ರೋಕ್ತಾಃ ಪ್ರಧಾನಾಂಶಶ್ಚತುರ್ಮುಖಃ॥ __|_ ಹರಿಯಲ್ಲಿರುವ ಸ್ವರೂಪಭೂತವಾದ ತನ್ನ ಬಗೆಗಿನ ಜ್ಞಾನಕ್ಕೆ ಛಾಯೆಯಂತೆ ಸಾಕ್ಷಾತ್ ಪ್ರತಿಬಿಂಬಭೂತವಾದ ಬ್ರಹ್ಮವಿದ್ಯೆಯಲ್ಲಿ ಕೆಲವೇ ಅಂಶಗಳು ಮಾತ್ರ ದೇವತೆಗಳಲ್ಲಿ, ಋಷಿಗಳಲ್ಲಿ ಮತ್ತು ಸಾತ್ತ್ವಿಕ ಜೀವರುಗಳಲ್ಲಿಅವರವರ
ಯೋಗ್ಯತಾನುಸಾರವಾಗಿರುತ್ತದೆ. ಈ ದೇವಾದಿಗಳ ಎಲ್ಲಾ ಬ್ರಹ್ಮವಿದ್ಯೆಗೂ ಬಿಂಬರೂಪವಾದ ವಿದ್ಯೆ ಇರುವುದು ಶ್ರಿಲಕ್ಷ್ಮಿಯಲ್ಲಾದರೆ, ಪ್ರತಿಬಿಂಬರೂಪವಾದ ವಿದ್ಯೆ ಇತರ ಎಲ್ಲಾ ದೇವತೆಗಳಿಗಿಂತ ಅಧಿಕವಾಗಿ ಚತುರ್ಮುಖನಲ್ಲಿರುತ್ತದೆ. ಮೇಲಿನ ಶ್ಲೋಕದಲ್ಲಿ ‘ತಾಪತ್ರಯ’ ಎನ್ನುವ ಪದ ಬಳಕೆಯಾಗಿದೆ. ಈ ಪದವನ್ನು ಸಾಮಾನ್ಯವಾಗಿ ಎಲ್ಲರೂ ಬಳಸುತ್ತಾರೆ. ಆದರೆ ಹೆಚ್ಚಿನವರು ಇದರ ಹಿಂದಿರುವ ಅರ್ಥವನ್ನು ತಿಳಿದಿರುವುದಿಲ್ಲ. ಕೆಲವರು ತಾಪತ್ರಯ ಎಂದರೆ ‘ಸಮಸ್ಯೆ’ ಎಂದಷ್ಟೇ ತಿಳಿದಿರುತ್ತಾರೆ. ಆದರೆ ತಾಪತ್ರಯ ಎಂದರೆ ಮೂರು ಬಗೆಯ ತಾಪಗಳು: ೧. ಆಧ್ಯಾತ್ಮಿಕ: ಅಂದರೆ ಮಾನಸಿಕವಾದ ದುಃಖ, ವ್ಯಥೆ, ರೋಗ, ವೇದನೆ ಇತ್ಯಾದಿ. ೨. ಆದಿದೈವಿಕ: ಪ್ರಕೃತಿಯಿಂದ ಬರುವ ತಾಪಗಳು. ಉದಾಹರಣೆಗೆ: ಅತಿವೃಷ್ಟಿ, ಅನಾವೃಷ್ಟಿ, ಸಿಡಿಲು ಇತ್ಯಾದಿ ಪ್ರಾಕೃತಿಕ ತಾಪ. ೩. ಆದಿಭೌತಿಕ: ಅಪಘಾತ, ದರೋಡೆ, ಇತ್ಯಾದಿ ಭೌತಿಕ ತಾಪ. ಇದಲ್ಲದೆ ಸಂಚಿತ, ಪ್ರಾರಾಬ್ಧ ಮತ್ತು ಆಗಾಮಿ ಪಾಪಗಳೂ ಕೂಡಾ ತಾಪತ್ರಯಗಳು. ಅದೇ ರೀತಿ ಸ್ವಕೃತ, ಮಿತ್ರಕೃತ ಮತ್ತು ಶತ್ರುಕೃತ ತಾಪಗಳೂ ತಾಪತ್ರಯಗಳು. ಈ ತಾಪತ್ರಯಗಳನ್ನು ಮೀರಿನಿಲ್ಲುವ ಏಕೈಕ ಸ್ಥಿತಿ ‘ಭಗವದ್ ಪ್ರಜ್ಞೆಯಿಂದ ಪಡೆಯುವ ಮೋಕ್ಷಸ್ಥಿತಿ’. Posted by Vishnu Priyaat 11:09 PM
2 comments:
Email This
BlogThis!
Share
to Twitter
Share
to Facebook
Share
to Pinterest
Labels: Bannanje GovindAcharya,
Bhagavata in Kannada,
ಬನ್ನಂಜೆ ಗೋವಿಂದಾಚಾರ್ಯರು,
ಭಾಗವತ ಕನ್ನಡದಲ್ಲಿ FRIDAY, MARCH 10, 2017 SHRIMAD BHAGAVATA IN KANNADA -SKANDHA-03-CH-06(7) ಎಲ್ಲಾ ದೇವತೆಗಳಿಗೂ ಶರೀರ, ಶಕ್ತಿ, ಎಲ್ಲವೂ ಬಂದಿದೆ, ಆದರೆ ಅವರಲ್ಲಿ ಸಮಷ್ಟಿಪ್ರಜ್ಞೆ ಇರಲಿಲ್ಲ. ಹೀಗಾಗಿ ಒಬ್ಬೊಬ್ಬರು ಪ್ರತ್ಯೇಕವಾಗಿ ಸೃಷ್ಟಿ ಕಾರ್ಯ ಮುಂದುವರಿಸಲಾಗದೇ ಕಂಗಾಲಾಗುತ್ತಾರೆ. ಭಗವಂತ ಸೃಷ್ಟಿ ಮುಂದುವರಿಸುವ ಜವಾಬ್ದಾರಿ ನೀಡಿದ್ದಾನೆ, ಆದರೆ ಹೇಗೆ ಎನ್ನುವ ಯುಕ್ತಿ ತಿಳಿಯದ ದೇವತೆಗಳು ಭಗವಂತನ ಮುಂದೆ ಕೈಜೋಡಿಸಿ ಪ್ರಾರ್ಥಿಸಿಕೊಳ್ಳುತ್ತಾರೆ. ಮುಂದೆ ಬರುವ ಶ್ಲೋಕಗಳು ದೇವತೆಗಳ ಪ್ರಾರ್ಥನಾ ಮಂತ್ರಗಳಾಗಿವೆ. ಇದು ಬಹಳ ರೋಚಕವಾದ ಭಗವದ್ ಸ್ತುತಿ. ನತಾಃ ಸ್ಮ ತೇ ನಾಥ ಪದಾರವಿಂದಂ ಪ್ರಪನ್ನತಾಪೋಪಶಮಾತಪತ್ರಮ್ । ಯನ್ಮೂಲಕೇತಾ ಯತಯೋಽಞ್ಜಸೋರು ಸಂಸಾರದುಃಖಂ ಬಹಿರುತ್ಕ್ಷಿಪಂತಿ ॥೧೭॥ “ಭಗವಂತ, ನೀನು ನಮ್ಮನ್ನು ಸೃಷ್ಟಿ ಮಾಡಿ ನಮಗೆ ಶಕ್ತಿ ನೀಡಿದೆ. ಆದರೆ ಆ ಶಕ್ತಿಯನ್ನು ಬಳಸಿ, ನಾವೆಲ್ಲರೂ ಒಟ್ಟು ಸೇರಿ ಹೇಗೆ ಪ್ರಪಂಚ ಸೃಷ್ಟಿ ಮಾಡಬಹುದು ಎನ್ನುವುದು ನಮಗೆ ಹೊಳೆಯುತ್ತಿಲ್ಲ. ಶರಣು ಬಂದವರ ‘ಸಮಸ್ಯೆ’ ಎನ್ನುವ ಬಿಸಿಲಿಗೆ ನಿನ್ನ ಪಾದ ಕೊಡೆಯಂತೆ. ಆದ್ದರಿಂದ ನಾವು ನಿನ್ನ ಪಾದ ಕಮಲಗಳಿಗೆ ಮಣಿದಿದ್ದೇವೆ.” ಎಂದು ದೇವತೆಗಳು ಭಗವಂತನ ಮುಂದೆ ಕೈ ಮಗಿದು ಪ್ರಾರ್ಥಿಸುತ್ತಾರೆ. ಸಂಸಾರವೆಂದರೆ ಅದು ದುಃಖದ ಸಾಗರ. ಈ ದುಃಖದಿಂದ ಪಾರಾಗುವ ಒಂದೇ ಒಂದು ಸಾಧನ ಎಂದರೆ ಅದು ಭಗವಂತನ ಪಾದದಲ್ಲಿ ಶರಣಾಗುವುದು. ಭಗವಂತನನ್ನು ನಿರಂತರ ಆರಾಧಿಸುವ ಪ್ರಯತ್ನಶೀಲರು ‘ಯತಿ’ಗಳೆನಿಸುತ್ತಾರೆ. ದುಃಖ ನಿವಾರಣೆಗಿರುವ ಒಂದೇ ಒಂದು ಮಾರ್ಗ ಎಂದರೆ ಅದು ನಿರ್ಲಿಪ್ತತೆ. ಅಂತಹ ನಿರ್ಲಿಪ್ತತೆಯನ್ನು ಭಗವಂತನ ಪಾದದಲ್ಲಿ ಶರಣಾಗಿ ನಾವು ಪಡೆಯಬಹುದು. ಇಲ್ಲಿ ದೇವತೆಗಳಿಗೆ ಇನ್ನೂ ಸಂಸಾರ ದುಃಖ ಪ್ರಾರಂಭವಾಗಿಲ್ಲ. ಆದರೆ ಅವರು ಮುಂದೆ ಸೃಷ್ಟಿ ಮಾಡಲು ಹೊರಟಿರುವುದು ಸಂಸಾರವನ್ನು. ಅಂತಹ ಸಂಸಾರವನ್ನು ಸೃಷ್ಟಿ ಮಾಡಲು ಶಕ್ತಿ ಕೊಡು ಎಂದು ಅವರು ಇಲ್ಲಿ ಭಗವಂತನನ್ನು ಪ್ರಾರ್ಥಿಸಿದ್ದಾರೆ. Posted by Vishnu Priyaat 10:35 PM
No comments:
Email This
BlogThis!
Share
to Twitter
Share
to Facebook
Share
to Pinterest
Labels: Bannanje GovindAcharya,
Bhagavata in Kannada,
ಬನ್ನಂಜೆ ಗೋವಿಂದಾಚಾರ್ಯರು,
ಭಾಗವತ ಕನ್ನಡದಲ್ಲಿ WEDNESDAY, MARCH 8, 2017 SHRIMAD BHAGAVATA IN KANNADA -SKANDHA-03-CH-06(6) ಏತೇ ದೇವಾಃ ಕಲಾ ವಿಷ್ಣೋಃ ಕಾಲಮಾಯಾಂಶಲಿಂಗಿನಃ । ನಾನಾತ್ವಾತ್ ಸ್ವಕ್ರಿಯಾನೀಶಾಃ ಪ್ರೋಚುಃ ಪ್ರಾಂಜಲಯೋ ವಿಭುಮ್ ॥೧೬॥ ಈ ಅಧ್ಯಾಯದಲ್ಲಿ ಇಲ್ಲಿಯ ತನಕ ಅನೇಕ ತತ್ತ್ವಗಳ ಸೃಷ್ಟಿಯ ಕುರಿತಾದ ವಿವರಣೆಯನ್ನು ನೋಡಿದೆವು. ಆದರೆ ಈ ಮೇಲಿನ ಶ್ಲೋಕದಲ್ಲಿ ಬಹಳ ಸ್ಪಷ್ಟವಾಗಿ ಹೇಳುತ್ತಾರೆ: “ಯಾವುದೇ ತತ್ತ್ವದ ಸೃಷ್ಟಿ ಬರೀ ತತ್ತ್ವದ ಸೃಷ್ಟಿಯಲ್ಲ, ಅದು ಅದರ ಅಭಿಮಾನಿ ದೇವತೆಗಳ ಸೃಷ್ಟಿ” ಎಂದು. ಈ ಹಿಂದೆ ಹೇಳಿದಂತೆ: ಮಹತತ್ತ್ವದ ದೇವತೆ ಚತುರ್ಮುಖ, ಅಹಂಕಾರ ತತ್ತ್ವದ ದೇವತೆ ಶಿವ. ಆನಂತರ ಹತ್ತು ಇಂದ್ರಿಯಾಭಿಮಾನಿ ದೇವತೆಗಳು, ಪಂಚಭೂತಗಳ ದೇವತೆಗಳು, ಪಂಚ ತನ್ಮಾತ್ರೆಗಳ ದೇವತೆಗಳು. ಹೀಗೆ ಇದು ಮುಂದುವರಿಯುತ್ತದೆ. ನಮಗೆ ತಿಳಿದಂತೆ ಪಂಚಭೂತಗಳು ಅಭಿಮಾನಿ ದೇವತೆಗಳ ಹಾಗು ಅವರಿಂದ ಅಭಿಮನ್ಯವಾದ ಪಂಚಭೂತಗಳ ಸೃಷ್ಟಿ ಈಗಾಗಲೇ ಆಗಿದೆ. ಆದರೆ ಈ ಪಂಚಭೂತಗಳು ಇಂದು ನಾವು ಕಾಣುವ ಪಂಚಭೂತದಂತೆ ಸೃಷ್ಟಿಯಾಗಿಲ್ಲ. ಏಕೆಂದರೆ ಇಂದು ನಾವು ಕಾಣುವ ಮಣ್ಣು, ನೀರು, ಬೆಂಕಿ ಶುದ್ಧವಾದುದಲ್ಲ. ಅದು ಮಣ್ಣು-ನೀರು-ಬೆಂಕಿಯ ಮಿಶ್ರಣ. ಆದರೆ ಸೃಷ್ಟಿಯ ಈ ಘಟ್ಟದಲ್ಲಿ ಪರಿಶುದ್ಧ ಪಂಚಭೂತಗಳು ಮಾತ್ರ ಸೃಷ್ಟಿಯಾಗಿವೆ. ಅವು ಇನ್ನೂ ಬೆರಕೆ ಆಗಿಲ್ಲ. ಈವರೆಗೆ ಸೃಷ್ಟಿಯಾಗಿರುವ ಎಲ್ಲಾ ತತ್ತ್ವಗಳ ಅಭಿಮಾನಿ ದೇವತೆಗಳನ್ನು ಇಲ್ಲಿ ‘ಭಗವಂತನ ಕಲೆಗಳು’ ಎಂದು ಕರೆದಿದ್ದಾರೆ. ಭಗವಂತನ ಕಲೆಗಳು ಎಂದರೆ ಏನು ಎನ್ನುವ ವಿವರಣೆಯನ್ನು ನಾವು ಪ್ರಶ್ನೋಪನಿಷತ್ತಿನಲ್ಲಿ ಕಾಣುತ್ತೇವೆ. “_ಪ್ರಾಣಾಚ್ಛ್ರದ್ಧಾಂ ಖಂ ವಾಯುರ್ಜ್ಯೋತಿರಾಪಃ ಪೃಥಿವೀಂದ್ರಿಯಂ ಮನೋ__S__ನ್ನಮನ್ನಾದ್ ವೀರ್ಯಂ ತಪೋ ಮಂತ್ರಾಃ ಕರ್ಮ ಲೋಕಾ ಲೋಕೇಷು ನಾಮ ಚ ॥೬-೪॥_ ಭಗವಂತನ ಅಧೀನವಾಗಿರುವ ಹದಿನಾರು ದೇವತೆಗಳೇ ಆ ಹದಿನಾರು ಕಲೆಗಳು. “ಈ ಎಲ್ಲಾ ದೇವತೆಗಳು ಕಾಲಾಧೀನವಾಗಿ ದೇಹವನ್ನು ಪಡೆದರು” ಎಂದಿದ್ದಾರೆ ಮೈತ್ರೆಯರು. ಇಲ್ಲಿ ‘ಕಾಲ’ ಎಂದರೆ ಸಹಜವಾಗಿ ಸರ್ವಸಂಹಾರಕನಾದ ಭಗವಂತ ಎಂದರ್ಥ. ಇದಲ್ಲದೆ ಕಾಲಾಭಿಮಾನಿಯಾದ ಚತುರ್ಮುಖನೂ ಕಾಲ ಶಬ್ದ ವಾಚ್ಯ. ಏಕೆಂದರೆ ಯಾರು ಎಂದು ಹುಟ್ಟಬೇಕು ಎನ್ನುವ ವ್ಯವಸ್ಥೆಯ ಜವಾಬ್ಧಾರಿಯನ್ನು ಭಗವಂತ ಚತುರ್ಮುಖನಿಗೆ ನೀಡಿದ್ದಾನೆ. ಹಾಗಾಗಿ ಚತುರ್ಮುಖ ಒಂದು ರೂಪದಲ್ಲಿ ಕಾಲ ನಿಯಾಮಕ. ಇನ್ನು ಕಾಲ ಶಬ್ದದ ಪ್ರಸಿದ್ಧವಾದ ಅರ್ಥ ಲಕ್ಷ್ಮೀದೇವಿ. ಭಗವಂತನ ಕೈಯಲ್ಲಿರುವ ಲಕ್ಷ್ಮೀಸ್ವರೂಪವಾಗಿರುವ ಸುದರ್ಶನ ಚಕ್ರವನ್ನು ಶ್ರೀಚಕ್ರ ಅಥವಾ ಕಾಲ ಎಂದು ಕರೆಯುತ್ತಾರೆ. ಹೀಗಾಗಿ ಕಾಲ ಎಂದರೆ ಚಿತ್ ಪ್ರಕೃತಿ. ಒಟ್ಟಿನಲ್ಲಿ ಹೇಳಬೇಕೆಂದರೆ ಚತುರ್ಮುಖನ ಎರಡು ರೂಪಗಳು(ಕಾಲಾಭಿಮಾನಿ ಹಾಗು ಜೀವಾಭಿಮಾನಿ) ಮತ್ತು ಪ್ರಕೃತಿ ಅಭಿಮಾನಿನಿಯಾದ ಶ್ರೀಲಕ್ಷ್ಮಿ (ಚಿತ್ಪ್ರಕೃತಿ) ಈ ಮೂವರಿಂದ ಭಗವತನ ಕೃಪಾದೃಷ್ಟಿ ಬಿದ್ದ ಸಮಯದಲ್ಲಿ ದೇವತೆಗಳ ಶರೀರ ಸೃಷ್ಟಿಯಾಯಿತು. ಈ ಮೇಲಿನ ವಿವರಣೆಯನ್ನು ಆಚಾರ್ಯ ಮಧ್ವರು ತಮ್ಮ ತಾತ್ಪರ್ಯ ನಿರ್ಣಯದಲ್ಲಿ ಪಾದ್ಮಪುರಾಣದ ಪ್ರಮಾಣಶ್ಲೋಕವನ್ನು ನೀಡಿ ಸುಂದರವಾಗಿ ವಿವರಿಸಿರುವುದನ್ನು ನಾವು ಕಾಣುತ್ತೇವೆ. _ಕಾಲಮಾಯಾಂಶಲಿಙ್ಗಿನಃ__ __।__ __ತನ್ನಿಮಿತ್ತಶರೀರಾಃ__ __।__ __ಹಿರಣ್ಯಗರ್ಭಸ್ಯೈವ ಕಾಲಾಭಿಮಾನೀ ಜೀವಾಭಿಮಾನೀತಿ ದ್ವಿವಿಧಂ ರೂಪಮ್__ __।__ __ ‘__ಕಾಲಜೀವಾಭಿಮಾನೇನ ರೂಪದ್ವನ್ದ್ವೀ ಚತುರ್ಮುಖಃ॥___ ಮೇಲಿನ ಶ್ಲೋಕದಲ್ಲಿ ಲಿಂಗ ಎನ್ನುವ ಪದ ಬಳಕೆಯಾಗಿದೆ. ಸಾಮಾನ್ಯವಾಗಿ ಲಿಂಗ ಎಂದು ಹೇಳಿದಾಗ ನಮಗೆ ನೆನಪಿಗೆ ಬರುವುದು ಶಿವಲಿಂಗ. ಆದರೆ ಇತರ ದೇವತೆಗಳನ್ನೂ ಲಿಂಗ ರೂಪದಲ್ಲಿ ಪೂಜಿಸುತ್ತಾರೆ. ವಿಷ್ಣುಲಿಂಗವುಳ್ಳ ಅನೇಕ ದೇವಾಲಯಗಳೂ ನಮ್ಮಲ್ಲಿವೆ(ಉದಾಹರಣೆಗೆ ಶಂಕರನಾರಾಯಣ ದೇವಸ್ಥಾನ). ಮೇಲಿನ ಶ್ಲೋಕದಲ್ಲಿ ಲಿಂಗ ಎನ್ನುವ ಪದವನ್ನು ‘ಕಾಣದ ವಸ್ತುವನ್ನು ಕಾಣುವಂತೆ ಮಾಡುವ ಸಾಧನ’ ಅಥವಾ ‘ಶರೀರ’ ಎನ್ನುವ ಅರ್ಥದಲ್ಲಿ ಬಳಸಲಾಗಿದೆ. ಒಟ್ಟಿನಲ್ಲಿ ಹೇಳಬೇಕೆಂದರೆ: ಚತುರ್ಮುಖನ ಎರಡು ರೂಪಗಳು ಮತ್ತು ಚಿತ್ ಪ್ರಕೃತಿಯಿಂದ ದೇವತೆಗಳಿಗೆ ಪರಸ್ಪರ ಕಾಣುವಂತಹ ಶರೀರ ಬಂತು. Posted by Vishnu Priyaat 10:22 PM
No comments:
Email This
BlogThis!
Share
to Twitter
Share
to Facebook
Share
to Pinterest
Labels: Bannanje GovindAcharya,
Bhagavata in Kannada,
ಬನ್ನಂಜೆ ಗೋವಿಂದಾಚಾರ್ಯ,
ಭಾಗವತ ಪುರಾಣOlder Posts
Home
Subscribe to: Posts (Atom) ಪ್ರಥಮ ಮತ್ತು ದ್ವಿತೀಯ ಸ್ಕಂಧ ಇ-ಪುಸ್ತಕ ಭಾಗವತ: ಕನ್ನಡದ ಕನ್ನಡಿಯಲ್ಲಿMY BLOG LIST
*
Bhagavad GitA In Kannada*
Kathopanishat
*
Prashnopanishat
*
ವಿಷ್ಣು ಸಹಸ್ರನಾಮ ಕನ್ನಡ ಅರ್ಥ ಸಾರಾಂಶ-Vishnu Sahasranama Meaning in KannadaFOLLOW BY EMAIL
JOIN US ON FACEBOOK
BLOG ARCHIVE
* ▼ 2017 (12)
* ▼ October
(2)
* Shrimad BhAgavata in Kannada -Skandha-03-Ch-06(10)... * Shrimad BhAgavata in Kannada -Skandha-03-Ch-06(9)* ► March (4)
* ► February
(3)
* ► January
(3)
* ► 2016 (22)
* ► September
(1)
* ► March (7)
* ► February
(8)
* ► January
(6)
* ► 2015 (57)
* ► December
(4)
* ► November
(4)
* ► October
(8)
* ► September
(12)
* ► August
(6)
* ► July (1)
* ► June (5)
* ► May (9)
* ► April (4)
* ► March (1)
* ► February
(1)
* ► January
(2)
* ► 2014 (27)
* ► September
(5)
* ► August
(1)
* ► July (1)
* ► June (3)
* ► April (4)
* ► March (5)
* ► February
(5)
* ► January
(3)
* ► 2013 (115)
* ► December
(9)
* ► November
(5)
* ► October
(7)
* ► September
(13)
* ► August
(7)
* ► July (4)
* ► May (17)
* ► April
(15)
* ► March (9)
* ► February
(17)
* ► January
(12)
* ► 2012 (24)
* ► December
(17)
* ► October
(3)
* ► August
(4)
ABOUT ME
* Vishnu Priya
View my complete profileTOTAL PAGEVIEWS
0
28
1
25
2
18
3
29
4
94
5
34
6
20
7
24
8
19
9
20
10
20
11
28
12
37
13
30
14
38
15
31
16
41
17
17
18
25
19
52
20
45
21
28
22
26
23
21
24
41
25
35
26
40
27
30
28
23
29
2
97229
Picture Window theme. Powered by Blogger .Details
Copyright © 2024 ArchiveBay.com. All rights reserved. Terms of Use | Privacy Policy | DMCA | 2021 | Feedback | Advertising | RSS 2.0